ನಾಗರಿ-ಕತೆ
ನರನಿಂದಲೆ ನಾಗರಿಕತೆಯ
ಹುಟ್ಟು ಅವನತಿಗಲೆರಡು
ಹುಟ್ಟು ನಾಗರಿಕತೆಯ ಮೊದಲು
ಅವನತಿ ಅನ್ಯ ನಾಗರಿಕತೆಯ ಹುಟ್ಟು
ಹುಟ್ಟು ಸಾವನು ಕಂಡು
ಸಾವು ಮರುಹುಟ್ಟಾಗುತಿರಲು
ನರಜಾತಿಯ ಸಹಬಾಳ್ವೆಯದು
ಸ್ವಾರ್ಥ ವ್ಯೆಷಮ್ಯದಿಂದಲಿ ಕೂಡಿರಲು
ಸೃಷ್ಟಿನಿಯಮದಿ ಕಾಲಚಕ್ರಕೆ ಸಿಕ್ಕು
ನಾಗರಿಕತೆಯದು ನಾಶವಾದಂತೆಲ್ಲ
ಮಣ್ಣು ಮಣ್ಣಲಿ ಬೆರೆತು
ಕಲ್ಲುಗಲು ಶಿಲೆಯಾಗಿ ನಾಗರಿ-ಕತೆಯ ಹೇಳುತವೆ.
- ಎಂ. ಪಿ ರಂಗನಾಥ
೯-೪-೨೦೧೦