ಗೆಳೆಯರೇ , ನಾನು ಕೆಲಸ ಮಾಡುತ್ತಿರುವ ಕಂಪನಿಯ CSR ( Corporate Social Responsibility ) ಚಟುವಟಿಕೆಯ ಒಂದು ಅಂಗ ಈ ಸ್ಪಂದನ . ಈ ಕಾರ್ಯಕ್ರಮದ ಮೂಲ ಉದ್ದೇಶ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸುವುದು. ಇದಕ್ಕಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯೊಂದನ್ನು ಗುರುತಿಸಲಾಗಿದೆ . ಕಾರ್ಯಕರ್ತನಾಗಿ ಸೇರಿದ ನಾನು ಹೀಗೊಂದು ದಿನ ಶಾಲೆಗೆ ಭೇಟಿ ಕೊಟ್ಟೆನು. ಅಲ್ಲಿಯ ಶಿಕ್ಷರೊಂದಿಗೆ ಮಾತನಾಡಿ ಮೂರನೆ ತರಗತಿ ಮಕ್ಕಳಿಗೆ ಪಾಠ ಮಾಡುವ ಅನುಮತಿ ಪಡೆದು , ಕೊಠಡಿಯೊಳಗೆ ಬಂದೆನು. ಕಪ್ಪು ಹಲಗೆ , ಸೀಮೆಸುಣ್ಣ , ಮಕ್ಕಳು ಧರಿಸಿದ್ದ ಶಾಲೆಯ ಸಮವಸ್ತ್ರ , ಇತ್ಯದಿಗಳನ್ನು ನೋಡಿ ನಾ ಓದಿದ ಪ್ರಾರ್ಥಮಿಕ ಶಾಲೆಯ ಚಿತ್ರ ಕಣ್ಣು ಮುಂದೆ ಬಂದಂತಾಯಿತು. ಬಾಲ್ಯವನ್ನು ನೆನೆದು ಖುಷಿಯಾದ ಮನಸ್ಸಿಗೆ , ವಾತಾವರಣ ನೋಡಿ ಮರುಕವೂ ಉಂಟಾಯಿತು. ಮಕ್ಕಳನ್ನು ಮಾತನಾಡಿಸಿದ ನಂತರ , ಪುಸ್ತಕದಲ್ಲಿ ಬರೆದಂತೆ " Dark , Bark , -----" ಎಂದು ಕಪ್ಪು ಹಲಗೆಯ ಮೇಲೆ ಬರೆದೆ. ಕೊಟ್ಟ ಎರೆಡು ಶಬ್ದದ ಪ್ರಾಸದಂತೆ ಮೂರನೆ ಶಬ್ದ ಬರೆಯಲು ಸೂಚಿಸಿತ್ತು . ಎಲ್ಲರೂ ಮೌನವಾಗಿದ್ದು ಕಂಡು ಉತ್ತರಕ್ಕಾಗಿ ಕುತೂಹಲದಿಂದ ಕಾದೆ . ಮಕ್ಕಳು ನನ್ನನ್ನು ತದೇಕಚಿತ್ತದಿಂದ ನೋಡುತ್ತ D..B... ಎಂದು ಕೂಗುತ್ತಿದ್ದನ್ನು ನೋಡಿ , ಹೊರಗೆ ನಾಲ್ಕನೆ ತರಗತಿಗೆ ಪಾಠ ಮಾಡುತಿದ್ದ ಶಿಕ್ಷಕರು ಹೇಳಿದರು " ಮಕ್ಕಳಿಗೆ A,B,C,D ....a,b,c,d ಅಷ್ಟು ಸರಿಯಾಗಿ ಬರುವುದಿಲ್ಲ " ಎಂದು . ಕೇಳಿ ಧಿಗ್ಬ್ರಾಂತನಾದೆ. !! ಅಕ್ಷರ ಕಲಿಯದ ಮಕ್ಕಳು ಶಬ್ದ ಕಲಿಯುವುದು ಎಂದು ? ಶಬ್ದ ಕಲಿತು ವಾಕ್ಯ ರಚಿಸುವುದು ಎಂದು ? .. ನಂತರ ಕಪ್ಪು ಹಲಗೆಯ ಮೇಲೆ ಅಕ್ಷರ ಬರೆದು ಗುರುತಿಸುವಂತೆ ಸೂಚಿಸಿದೆ . "d" ಎಂದು ಬರೆದಾಗ "b" ಎಂದು "j" ಎಂದು ಬರೆದಾಗ "i" ಎಂದು ಕೂಗಲಾರಂಭಿಸಿದರು . ಶಿಕ್ಷಣ ವ್ಯವಸ್ಥೆಯನ್ನು ಕಂಡು ಅಸಮಾಧಾನವಾಯಿತು . ಮುಂದಿನ ಎರೆಡು ಭೇಟಿಗಳಲ್ಲಿಯೂ ಅಕ್ಷರ ಕಲಿಸಿದೆ . ಹಿಂದಿನ ಸಾಲಿನಲ್ಲಿ ಕೂಡುವ ಲಿಂಗರಾಜು ಎನ್ನುವ ವಿದ್ಯಾರ್ಥಿಯನ್ನು ನಾನು ಮೊದಲನೆಯ ದಿನ ಗಮನಿಸಿದೆ. ತನ್ನದೇ ಆದ ಪ್ರಪಂಚದಲ್ಲಿ ಕೂತಿದ್ದ . ಕೇಳಿದಾಗ ತನಗೆ ಬರಿಯಲು ಬರುವುದಿಲ್ಲವೆಂದು ಹೇಳಿದ . ಮುಂದಿನ ಸಾಲಿನಲ್ಲಿ ಕೂರಿಸಿ ಅವನ ಪುಸ್ತಕದಲ್ಲಿ ಅಕ್ಷರವನ್ನು ಅವನೊಂದಿಗೆ ಹೇಳಿಸುತ್ತಾ ಬರೆದು ಕೊಟ್ಟಿದ್ದೆ . ನನ್ನ ಇತ್ತೀಚಿನ ಶಾಲೆಯ ಭೇಟಿ ಮುಗಿಸಿ ಹೊರಟಿದ್ದೆ , ಸಾರ್ ..... ಎಂದು ಕೂಗುತ್ತಾ ಲಿಂಗರಾಜು ಬಂದವನೆ ನನಗೆ a b c d ... ಈಗ ಬರುತ್ತೆ ಎಂದ. ನಾನು ಅಷ್ಟು ಗಮನಿಸಲಿಲ್ಲ .. ನೀವು ಮೊದಲನೆ ದಿನ ಬರೆದದ್ದು D .. A .. R .. K , B ..A..R..K ಎಂದಾಗ ಆಶರ್ಯವಾಗಿ "L" ಅಕ್ಷರ ಬರೆಯಲು ಹೇಳಿದೆ . ತಲೆ ತಗ್ಗಿಸಿ ಸುಮ್ಮನಾದ , ನನಗೆ ಆ ಕ್ಷಣ ಬೇಜಾರಾಯಿತು. ಮರು ಕ್ಷಣವೇ ತನ್ನ ಪುಸ್ತಕದ ಮೊದಲನೆ ಪುಟ ತೆಗೆದು ಯಾರೊ ಬರೆದುಕೊಟ್ಟ Lingaraju ಎನ್ನುವುದರಲ್ಲಿ ಮೊದಲನೆ ಅಕ್ಷರ ತೋರಿಸಿ ಅದರ ಕೆಳಗೆ "l" ಎಂದು ಬರೆದ . ನನ್ನ ಕಣ್ಣು ನನಗೆ ಗೊತ್ತಿಲ್ಲದಂತೆ ಒದ್ದೆಯಾಯಿತು . ಅವನಿಗೆ 'h', 'a' 'p' 'p' 'y' ಅಕ್ಷರ ಬರೆಯಲು ಹೇಳಿ ಹ್ಯಾಪಿ ಎಂದು ಹೇಳಿದೆ . ನನ್ನ ಕೈ ಕುಲುಕಿ ಥ್ಯಾಂಕ್ಯೂ ಸಾರ್ ಎಂದು ಕೈಗೆ ಮುತ್ತಿಟ್ಟು ಒಳಗೆ ಹೋದ . ಕಣ್ಣಿನಲ್ಲಿ ಏನೋ ಬಿದ್ದವರಂತೆ ನಟಿಸಿ ಕಣ್ಣು ವರೆಸುತ್ತಾ ನಾನು ಹೊರಟೆನು.
ಸ್ನೇಹಿತರೆ , ಬನ್ನಿ ಸ್ಪಂದಿಸೋಣ . ಅವಕಾಶವಂಚಿತರಿಗೆ ನಮ್ಮಿಂದಾದ ಸಹಾಯ ಮಾಡೋಣ. ಕೇವಲ ಬಿಡುವಿನ ವೇಳೆಯಲ್ಲಿ ಸಹಾಯ ಮಾಡದೆ ಅವಶ್ಯಕತೆ ಇದ್ದಾಗಲೂ ಸಹಾಯ ಮಾಡೋಣ . ಸಾಕ್ಷರ ಸಮಾಜ ಕಟ್ಟೋಣ !!
- ರಂಗನಾಥ ಎಂ .ಪಿ
೨೪-೦೬-೨೦೧೨
ಸ್ನೇಹಿತರೆ , ಬನ್ನಿ ಸ್ಪಂದಿಸೋಣ . ಅವಕಾಶವಂಚಿತರಿಗೆ ನಮ್ಮಿಂದಾದ ಸಹಾಯ ಮಾಡೋಣ. ಕೇವಲ ಬಿಡುವಿನ ವೇಳೆಯಲ್ಲಿ ಸಹಾಯ ಮಾಡದೆ ಅವಶ್ಯಕತೆ ಇದ್ದಾಗಲೂ ಸಹಾಯ ಮಾಡೋಣ . ಸಾಕ್ಷರ ಸಮಾಜ ಕಟ್ಟೋಣ !!
- ರಂಗನಾಥ ಎಂ .ಪಿ
೨೪-೦೬-೨೦೧೨